Thursday 25 July 2019

ಸುಗಂಧ - Perfume

ಸುಗಂಧದಿಂದ
ನಿನ್ನ ವಸ್ತ್ರವನ್ನು ಮಾತ್ರ
ಪರಿಮಳವಾಗಿಸಬಹುದು,
ಹೃದಯವನ್ನಲ್ಲ...!

Wednesday 24 July 2019

ಆಟದಲ್ಲೊಂದು ಪ್ರೀತಿ

ಎರಡೂ ತಂಡಗಳ ಮಧ್ಯೆ ಯುದ್ಧವಿರಲಿಲ್ಲ, ಆಟದಲ್ಲೊಂದು ಪ್ರೀತಿಯಿತ್ತು.
ಅದಕ್ಕೆ ವಿಶ್ವದ ಪ್ರೀತಿ ಅವರ ಮುಂದೆ ತಲೆಬಾಗಿದೆ.
#WorldCup2019 #CricketHistory

ವಿಶ್ವಕಪ್ ‌ಫೈನಲ್ 2019

ಎರಡೂ ತಂಡಗಳು ಜಯಿಸಿದ ವಿಶ್ವಕಪ್ ಫೈನಲ್;
ಕ್ರಿಕೆಟ್ ನಲ್ಲಿ ಐತಿಹಾಸಿಕ ದಿನ.
ಇಂಗ್ಲೆಂಡಿನ ಬೌಂಡರಿ ಪ್ರೀತಿಗೆ ಮುತ್ತಿಕ್ಕಿದ ವಿಶ್ವಕಪ್.
#WorldCup2019

ಕಳ್ಳರ ಆಯ್ಕೆ

ಕಳ್ಳರನ್ನು ಆಯ್ಕೆ ಮಾಡಿದ ಮೇಲೆ ಕಳ್ಳರು ಕದಿಯದೆ ಬಿಡುತ್ತಾರ!!!

ಪತ್ರಕರ್ತರ ಕೊರಗು

'ಕಳೆದ ಒಂದು ವಾರದ ಕೆಲಸದಿಂದ 10 ವರ್ಷದ ಆಯುಷ್ಯ ಕಮ್ಮಿಯಾಯ್ತು' ಎಂಬುವುದು ಹಲವು ಮಾಧ್ಯಮ ಸ್ನೇಹಿತರ ಕೊರಗು. ಪಾಪ!
(ಕರ್ನಾಟಕ ರಾಜಕೀಯದ ಬೆಳವಣಿಗೆ: ಅತೃಪ್ತ ಶಾಸಕರಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ರಾಜೀನಾಮೆಯ ಬೆದರಿಕೆ)

ನಂಬಲು ಅಸಾಧ್ಯ

ಭ್ರಷ್ಟ, ನೀಚ, ಕುದುರೆ ವ್ಯಾಪಾರವನ್ನು ಮಾಡಿಯಾದರೂ ಸರಕಾರ ರಚಿಸಿ ಮುಖ್ಯಮಂತ್ರಿಯಾಗಿ ಒಂದಷ್ಟು ದಿನ ಇರಬಹುದೆಂದರೂ ನಂಬಲು ಸಾಧ್ಯವಿಲ್ಲ. ಮತ್ತೆ ಜೈಲು ನೆನಪಾದರೆ!! ಅಥವಾ ಮತ್ತೊಬ್ಬ ಮುಖ್ಯಮಂತ್ರಿ ಸ್ಥಾನ ನನಗೆ ಬೇಕು ಎಂದು ಡಂಗುರ ಬಾರಿಸುತ್ತಾ ಬಂದರೆ?
ಕಳೆದ ಬಿಜೆಪಿ ಅವಧಿಯಲ್ಲಿ ಒಂದಲ್ಲ ಮೂರು ಮೂರು ಮುಖ್ಯಮಂತ್ರಿ.
#KarnatakaPoliticalCrisis

ಅತೃಪ್ತರಿಗೆ ಕೆಲಸವಿದೆ

ಅತೃಪ್ತ ಶಾಸಕರು ಎಲ್ಲಿದ್ದರು ಸಮಾಜಕ್ಕೆ ಏನೂ ಪ್ರಯೋಜವಿಲ್ಲ. ಹಾಗಾಗಿ ಅವರೆಲ್ಲ ಬರಲಿ.. ಗದ್ದೆಗೆ ಗೊಬ್ಬರ ಹಾಕಿಸೋಣ.
#KarnatakaPoliticalCrisis

ಯಾವುದಕ್ಕೆ ಚಲಾಯಿಸಿದರೂ ಶಾಸಕರು ಬಿಜೆಪಿಗೆ

ಮೊದಲು ಸಮಸ್ಯೆಯಿದ್ದದ್ದು ನೀವು ಯಾವುದೇ ಪಕ್ಷಕ್ಕೆ ಮತ ಚಲಾಯಿಸಿದರೆ ಅದು ಬಿಜೆಪಿಗೆ ಹೋಗ್ತಿತ್ತು.
ಈಗ ನೀವು ಯಾವುದೇ ಪಕ್ಷಕ್ಕೆ ಮತ ಚಲಾಯಿಸಿದರೂ ಚುನಾಯಿತ ಶಾಸಕ ಬಿಜೆಪಿಗೆ ಹೋಗ್ತಿದ್ದಾರೆ.
-ಭಾಷಾಂತರ
#BJPKidnapsMLAs #OperationKamala

ಬಿಜೆಪಿಯ ಅತೃಪ್ತರು

ನಾನೂ ಕಾಂಗ್ರೆಸ್ಸಿನಲ್ಲಿರುತ್ತಿದ್ದರೆ ಅತೃಪ್ತ ಶಾಸಕರಿಗೆ ಸಿಗುವ ದೊಡ್ಡ ಹಣ ನನಗೂ ಸಿಕ್ತಿತ್ತು: ಅತೃಪ್ತಿಗೊಂಡ ಬಿಜೆಪಿ ಶಾಸಕರು 😂
#KarnatakaCrisis

ರೆಸಾರ್ಟ್‌ ರಾಜಕೀಯ

ಇನ್ನು ರೆಸಾರ್ಟ್‌ ಮಾಡಿಡುವುದೇ ಉತ್ತಮ
ನಿನ್ನೆ ಕಾಂಗ್ರೆಸ್
ಇಂದು ಬಿಜೆಪಿ
ನಾಳೆ ಜೆಡಿಎಸ್  #KarnatakaPoliticalCrisis

ರಾಜಕಾರಣಿಗಳ ಎರಡು ಮುಖ

ವೇದಿಕೆ ಕಟ್ಟಿ ಬಿಜೆಪಿಗೆ ಹಿಗ್ಗಾ ಮುಗ್ಗಾ ಬೈದು ಭಾಷಣ ಬಿಗಿದು ಚುನಾಯಿತರಾದವರು ಇಂದು ಅವರೊಂದಿಗೆ ವೇದಿಕೆ ಹಂಚಲು ಹೊಂಚು ಹಾಕಿದ್ದಾರೆಂದರೆ!
#ಎರಡುಮುಖ

ಜನತೆಗೆ ದ್ರೋಹ ಬಗೆದ ಶಾಸಕರು

ಇಂತಹ ಅಸಹ್ಯ ರಾಜಕೀಯಕ್ಕೆ ನಾವು ಮತದಾರರಾಗಿದ್ದು.‌ ಜನರ ಮತವನ್ನು ಪಡೆದು ಜನತೆಗೆ ಮತ್ತು ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ.
ನಾಚಿಕೆಯಾಗ್ತಿದೆ.

ಕ್ರೀಡೆ; ಸೋಲು-ಗೆಲುವು

ಕ್ರೀಡೆಯಲ್ಲಿ ಸೋಲು-ಗೆಲುವು ಇದ್ದದ್ದೆ. ನಿನ್ನೆ ಗೆದ್ದಿದ್ದೇವೆ,
ಇಂದು ಸೋತಿದ್ದೇವೆ, ನಾಳೆ ಗೆಲ್ಲಲ್ಲಿದ್ದೇವೆ.
#WellPlayedIndia
#WorldCup2019

ರಾಜಕೀಯ ಮಾರುಕಟ್ಟೆ ದರ ಹೆಚ್ಚಳ

ರಾಜಕೀಯ ಮಾರುಕಟ್ಟೆಯ ದರ ಹೆಚ್ಚಾಗಿದೆ.
ಹಾಗಾಗಿ ಮತ್ತೆ ಎರಡನ್ನು ಮಾರಾಟ ಮಾಡಲಾಗಿದೆ.
#KarnatakaCrisis #KarnatakaPolitics

ಯಾಕೇ ಮೋದಿಯ ಸೋಲಲ್ಲ?

ಭಾರತಕ್ಕೆ ಗೆಲುವಾಗುತ್ತಿದ್ದರೆ
ಅದು ಮೋದಿಯ ಗೆಲುವಾಗುತ್ತಿತ್ತು...
ಭಾರತಕ್ಕೆ ಸೋಲಾಗಿದೆ
ಯಾಕೆ ಪ್ರಧಾನಿ ಮೋದಿಯ ಸೋಲಾಗಬಾರದು?

ಭಾರತದ ಸೋಲಿಗೆ ಹೊಣೆ ಯಾರು?

ವಿಶ್ವಕಪ್ ನಲ್ಲಿ ಭಾರತ ಸೋಲಿಗೆ ಯಾರನ್ನು ಹೊಣೆ ಮಾಡುವುದು?
ಮೋದಿಯನ್ನ ಅಥವಾ ಆಟಗಾರರನ್ನ?

ರಾಜಕೀಯ ವ್ಯಾಪಾರ

ಚುನಾವಣೆಯಲ್ಲಿ ಯಾರು ಹಣ ಹಂಚಿರುತ್ತಾರೊ ಅವರಿಗೆ ಹಣ ಮಾಡುವ ಉದ್ದೇಶ ಮಾತ್ರವಿರುತ್ತದೆ. ಅವರಿಗೆ ಸಮಾಜದ ಬಗ್ಗೆ ಕಾಳಜಿನೇ ಇರುವುದಿಲ್ಲ. 
#DirtyPolitics

ಹಣದ ರಾಜಕೀಯ

ಉತ್ತಮ ತಳಿಯ ಆದರೆ
ಉಪಯೋಗಕ್ಕಿಲ್ಲದ ಶಾಸಕರು ಮಾರಾಟಕ್ಕಿದ್ದಾರೆ.
ಕೂಡಲೇ ಸಂಪರ್ಕಿಸಿ. ಶ್ರೀಮಂತರಾಗುವ ಅವಕಾಶ.
#ಹಣದ_ರಾಜಕೀಯ

ಮತದಾರರಿಗೆ ರಾಜೀನಾಮೆ!

ಈ ಶಾಸಕ, ಸಚಿವರಿಗೆ ಇರುವ ರಾಜೀನಾಮೆ,
ಮತದಾರರಿಗಿರುತ್ತಿದ್ದರೆ ಸರಕಾರವನ್ನು ಹೇಗೆ ಚಲಾಯಿಸಬೇಕೆಂದು ತೀರ್ಮಾನಿಸುತ್ತಿದ್ದರು.
#DirtyPolitics

ಬೆಂಕಿ ಹಚ್ಚುವವರೆಲ್ಲಿ?

'ಬೆಂಕಿ ಹಚ್ಚುವ' ಯಾರನ್ನೂ ಪುತ್ತೂರು ಅತ್ಯಾಚಾರ ಪ್ರಕರಣದಲ್ಲಿ ಕಾಣುತ್ತಿಲ್ಲ.
Mostly ಜಿಲ್ಲೆಗೆ ಹಚ್ಚಿದ ಬೆಂಕಿ ತಮ್ಮನ್ನೂ ಸುಡುತ್ತೆ ಎಂದಾ? ಗೊತ್ತಿಲ್ಲ

ನಮ್ಮವರು!!!?

ಧ್ವೇಷ ತುಂಬಿದ ಮನಸ್ಸನ್ನಿಟ್ಟು ಸದಾ ಸಾಮಾಜಿಕ ತಾಣದ ರಣರಂಗದಲ್ಲಿ ಹೋರಾಡುತ್ತಿದ್ದಾಗ 'ಅವರು ನಮ್ಮವರು', ಅತ್ಯಾಚಾರ ಮಾಡಿದಾಗ ಅವರಿಗೂ ನಮಗೂ ಸಂಬಂಧವೇ ಇಲ್ಲ.

(ಪುತ್ತೂರು ಕಾಲೇಜು ವಿದ್ಯಾರ್ಥಿಯ ಸಾಮೂಹಿಕ ಅತ್ಯಾಚಾರ ಘಟನೆ

Server Down?!!

ಸರಕಾರ
ಡೌನಾಗುವಾಗ automatically
ಸರ್ವರ್ ಕೂಡಾ ಡೌನಾಗುತ್ತೆ
#ServerDown

ನೈತಿಕತೆ ಕಳೆದುಕೊಂಡ ಸಂಸ್ಕೃತಿಯ ಪಾಠ

ಸಂಸ್ಕೃತಿ, ದೇಶಪ್ರೇಮದ ಬಗ್ಗೆ ಪುಂಗಿಯೂದುತ್ತಿದ್ದ ಅದೆಷ್ಟು ಜನ ನಾಳೆ ಅತ್ಯಾಚಾರಕ್ಕೊಳಗಾದ ಸಹೋದರಿಯ ಪರ ಬೀದಿಯಲ್ಲಿ ನಿಂತು ನ್ಯಾಯ ಕೇಳುತ್ತಾರೆ ನೋಡೋಣ.

(ಪುತ್ತೂರು ಕಾಲೇಜು ವಿದ್ಯಾರ್ಥಿಯ ಸಾಮೂಹಿಕ ಅತ್ಯಾಚಾರ ಘಟನೆ)

ಎದೆಗೆ ಚೂರಿ

ಉಪ್ಪಿನಂಗಡಿಯವರೆಂದು
ಎದೆ ತಟ್ಟಿಕೊಳ್ಳುತ್ತಿದ್ದೆವು...
ಎದೆಗೆನೇ ಚೂರಿ ಹಾಕಿ ಬಿಟ್ಟಿದ್ದಾರೆ.
(ಪುತ್ತೂರು ಕಾಲೇಜು ವಿದ್ಯಾರ್ಥಿಯ ಸಾಮೂಹಿಕ ಅತ್ಯಾಚಾರ ಘಟನೆ)

ಏಕೀ ಮಿನಿಟ್..!

'ಏಕ್ ಮಿನಿಟ್' ಕ ಬಾತ್ ಚೋಡೊ
ಏಕ್ ಸಾಲ್ ದಿಯಾತೋ ಬಿ
ಮೇ ನಹೀ ಆತಾ!
ಓ ಹಮಾರಾ ಹುಡುಗರು
(ಪುತ್ತೂರು ಕಾಲೇಜು ವಿದ್ಯಾರ್ಥಿಯ ಸಾಮೂಹಿಕ ಅತ್ಯಾಚಾರ ಘಟನೆ)
#ChobakkaBol

ರಾಜೀನಾಮೆಯ ಶಾಸಕರು

ಈ ರಾಜೀನಾಮೆ ನೀಡುವ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವುದೇಕೆ ಎಂಬುವುದೇ ಅರ್ಥವಾಗುತ್ತಿಲ್ಲ

ಹಿಂದುತ್ವ ಕೇಸರಿ!

ಕೇಸರಿ ದೇಶಕ್ಕೆ ಮಾತ್ರ ಮಾರಕವಲ್ಲ..!
ಕ್ರೀಡೆಗೂ ಮಾರಕ‌ ಎಂಬುದು ಇಂದಿನ ಪಂದ್ಯದಲ್ಲಿ ಸ್ಪಷ್ಟವಾಗಿದೆ‌.
#IndvsEng

ಬೀದಿಗಿಳಿದ ಗೂಂಡಾಗಳು

'ಜೈ ಶ್ರೀರಾಮ್'
ಹೆಸರಿನಲ್ಲಿ ಬೀದಿಗಿಳಿದ ಗೂಂಡಾಗಳನ್ನು ದೇಶದ ಜನತೆ ಕಟ್ಟಿ ಹಾಕಲು ಮುಂದಾಗಬೇಕಾಗಿದೆ.
#JusticeForTabrezAnsari

ಕ್ರಿಕೆಟ್ ಕೂಸಿನ ಸಾಧನೆ

ಕ್ರಿಕೆಟ್ ಕೂಸಂತೆ..!
ಮಾನ‌ ಉಳಿದದ್ದೇ ಪುಣ್ಯ..

ಯಾರನ್ನೂ ತುಂಬಾ ಕೀಳಾಗಿಸಬೇಡಿ.‌ ಇವರಂತೆ ಅವರಲ್ಲೂ ಒಂದು ಗುರಿಯಿರುತ್ತೆ..
Cricket World cup 2019

ಚುನಾಯಿತರಾಗದ ಜನಪ್ರತಿನಿಧಿಗಳು

ಕೆಲವರು ಚುನಾವಣೆಯಲ್ಲಿ ಗೆಲ್ಲದಿದ್ದರೂ
ಜನರ ಸೇವೆಯಲ್ಲಿ ನಿರಂತರವಾಗಿರುತ್ತಾ, ಜನಪ್ರತಿನಿಧಿಗಳಾಗಿರುತ್ತಾರೆ.

ಹಬ್ಬದ ಆಹ್ವಾನ

ಹಬ್ಬಕ್ಕೆ ಕರೆದೇ ಇಲ್ಲ‌ ಎಂದು ಆರೋಪಿಸುವ ಪ್ರೀತಿಯ ಹೃದಯಗಳೇ, ಕರೆದಾಗ ಬಂದಿರುವ ಬಗ್ಗೆ ಸ್ವಲ್ಪ ಹೇಳಿ ನೋಡುವ! ಒಪ್ಪಿಕೊಳ್ಳೋಣ

ಚುನಾಯಿತ ಪ್ರತಿನಿಧಿಗಳು

ಇನ್ನು ಗೆದ್ದವರಿಗೆ ಮತ್ತು ಸೋತವರಿಗೆ ಮತದಾರರು ಕಾಣುವುದು ಮಾತ್ರ ಮುಂದಿನ ಚುನಾವಣೆಯಲ್ಲಿ..
ಒಪ್ಪಿಕೊಳ್ಳಲಾಗದ ಸತ್ಯ.
#IndianElections2019

ಲೋಕಸಭಾ ಚುನಾವಣಾ ಫಲಿತಾಂಶ-2019

ಯಾರು ಏನೇ ಅಂದ್ರು
ಭಾರತ ಸೋತಿರೊದು ನಿಜ!

Power of Money

ಏನೂ ಇಲ್ಲದೆ
ಹಣ ನಿನ್ನೊಂದಿಗಿದ್ದರೆ
ಎಲ್ಲರೂ ನಿನ್ನ ಜೊತೆಗಿರುತ್ತಾರೆ..!
ಎಲ್ಲವೂ ಇದ್ದು
ಹಣ ನಿನ್ನೊಂದಿರಗಿದ್ದರೆ
ಯಾರೂ ನಿನ್ನ ಜೊತೆಗಿರುವುದಿಲ್ಲ..!

Read my thoughts on YourQuote app at https://www.yourquote.in/rilwan-husain-6ik0/quotes/eenuu-illde-hnn-ninnondigiddre-ellruu-ninn-jotegiruttaare-qkdoa

ಜೀವನದ ಪಾಠ

ನಮ್ಮನ್ನು ಅರ್ಥ ಮಾಡಿಕೊಂಡವರನ್ನ
ನಾವು ಅರ್ಥ ಮಾಡಿಕೊಂಡಿರುವುದಿಲ್ಲ.
ನಾವು ಅರ್ಥ ಮಾಡಿಕೊಂಡವರು
ನಮ್ಮನ್ನು ಅರ್ಥ ಮಾಡಿಕೊಂಡಿರುವುದಿಲ್ಲ.
ಇದುವೇ ಜೀವನ!

ದೊಡ್ಡತನ

ಹಸಿದಿರುವ ಹೊಟ್ಟೆಗಳಿಗೆ
ಒಂದು ತುತ್ತು ಅನ್ನ ನೀಡುವ
ನಿಮ್ಮ ಹೃಯವಂತಿಕೆಗಿಂತ
ದೊಡ್ಡತನ ಬೇರೊಂದಿಲ್ಲ.

ಸಕಾರಾತ್ಮಕ ಚಿಂತನೆ

'ಸಕಾರಾತ್ಮಕ ಚಿಂತನೆಯೆಂದರೆ ಅವರು ಅಧಿಕಾರಕ್ಕೇರಿದ ಮರುದಿನವೇ ಜನಪರವಾದ ಕಾರ್ಯಕ್ರಮವನ್ನು ಆಯೋಜಿಸಿ ಜನರನ್ನು ಮತ್ತೆ ಎಚ್ಚರಗೊಳಿಸಲು ಪ್ರಯತ್ನಿಸುವುದು'.

ಹೊಸ ಭಾರತಕ್ಕೆ ಸ್ಚಾಗತ

ಹೊಸ ಭಾರತಕ್ಕೆ ಸ್ವಾಗತ..!
ಶಾ- ಗ್ರಹಮಂತ್ರಿ

ಅವಳೆಂದರೆ ಇವಳೇ...!

#ಅವಳೆಂದರೆ...
9 ತಿಂಗಳು ಹೊತ್ತವಳು
ನನಗಾಗಿ ನಿದ್ದೆ ಕಳೆದವಳು
ಜನ್ಮ ನೀಡಿ ಈಗಲೂ ಮುದ್ದಾಡಿಸುವವಳು
ನನ್ನ ಆರೋಗ್ಯದ ಬಗ್ಗೆ ಚಿಂತಿಸುವವಳು
ನನಗಾಗಿ ಕಣ್ಣೀರಿನೊಂದಿಗೆ ಪ್ರಾರ್ಥಿಸುವವಳು
ಪ್ರೀತಿಯನ್ನು ಕಲಿಸಿದವಳು
ಮಾನವೀಯತೆಯ ಪಾಠ ಮಾಡಿದವಳು
ಸಮಾಜ ಸೇವೆಗೆ ಪ್ರೇರಣೆ ನೀಡಿದವಳು
ಹಸಿವಾಗಿದ್ದರೂ ನನ್ನ ಹಸಿವನ್ನು ಕಂಡವಳು
ಪ್ರಥಮ ತಪ್ಪನ್ನು ತಿದ್ದಿದವಳು
ನಿದ್ದೆಯಲ್ಲಿದ್ದಾಗ ಕಂಬಳಿ ಹಾಸುವವಳು
ನನ್ನ ಮೇಲೆ ಹಲವು ಕನಸುಗಳನ್ನ ಕಂಡ
ಕಾಲಾಡಿಯಲ್ಲಿ ಸ್ವರ್ಗವಿರುವ ತಾಯಿಯವಳು
ಉಮ್ಮ..‌ಉಮ್ಮ.. ಉಮ್ಮ..
ವರ್ಣನೆಗಿಂತ ಮಿಗಿಲಾದ ಉಮ್ಮ..

#ಅವಳೆಂದರೆ...
ನಾನು ಬಾಕಿಯಿಟ್ಟ ಎದೆಹಾಲನ್ನು ಕುಡಿದವಳು
ಎದ್ದು ನಿಲ್ಲಲು ಪ್ರಯತ್ನಿಸುವಾಗ ಕೈ ಹಿಡಿದು ಎದ್ದು ನಿಂತವಳು
ಶಾಲೆಗೆ ಹೋಗುವಾಗ ಜೊತೆಯಾದವಳು
ನನ್ನ ಪ್ರೀತಿ, ಕೋಪ ಎಲ್ಲವನ್ನೂ ಸಹಿಸಿದವಳು
ನನ್ನ ಕೋಪವನ್ನು ಧೈರ್ಯದಿಂದ ತೋರಿಸಲು ವೇದಿಕೆ ಕೊಟ್ಟವಳು
ತಪ್ಪಿದಾಗ ತಿದ್ದಿದವಳು
ಅತಿಯಾಗಿ ಪ್ರೀತಿಸುವ
ಸದಾ ಅಣ್ಣ ಅಣ್ಣನೆಂದು ಕೂಗಾಡುವವ ತಂಗಿಯಂದಿರು..

#ಅವಳೆಂದರೆ...
ಈ ಒಂದಕ್ಷರ ಬರೆಯುವ ಕಲೆಯನ್ನು ನೀಡಿದವಳು
ವಿದ್ಯೆಯನ್ನು ಧಾರೆಯೆರೆದವಳು
ಉತ್ತಮ ವಿದ್ಯಾರ್ಥಿಯನ್ನಾಗಿ ರೂಪಿಸಬೇಕೆಂಬ ಕನಸು ಕಂಡವಳು
ಸತ್ಯವನ್ನು ಮಾತ್ರ ನುಡಿ ಎಂದು ಭವಿಷ್ಯವನ್ನು ಹಾರೈಸಿದವಳು
ಇಂದು ನಾನು ನಾನಗಿದ್ದರೆ ಅದು ಅವಳ ಅಂದಿನ ಪ್ರಯತ್ನವಾಗಿತ್ತು.
ವಿದ್ಯೆಯೆಂಬ ಆಯುಧವನ್ನು ಕೈಗೆ ನೀಡಿದ ನನ್ನೆಲ್ಲಾ ಟೀಚರ್ ಗಳು...

#ಅವಳೆಂದರೆ...
ಪ್ರೀತಿಸಿದವಳು..‌
ಕಣ್ಣು ಮಿಟಿಕಿಸಿದವಳು..
ಕಾಲೇಜು ಹಾಜರಾತಿ ಕಡಿಮೆಯಾಗದಂತೆ ನೋಡಿದವಳು..
ಕದ್ದು ಮುಚ್ಚಿ ಮಾತನಾಡಿದವಳು.
ನೀನೇ ಬೇಕೆಂದು ಹಠ ಹಿಡಿದವಳು
ಕೈ ಕೊಟ್ಟವಳು.
ಎರಡೋ ಮೂರು ಮಕ್ಕಳಿಗೆ ತಾಯಿಯಾದವಳು..

#ಅವಳೆಂದರೆ...
ಮುದ್ದಾಗಿ ಪ್ರೀತಿಸುವವಳು
ಸಂಗಾತಿಯಾಗುವವಳು
ಕನಸು ಪೂರೈಸುವವಳು
ನನ್ನ ಬೇಕು ಬೇಡಗಳಿಗೆ ಸ್ಪಂದಿಸುವವಳು..
ನನಗಾಗಿ ಕಾಯುವವಳು
ನನ್ನ ಮಕ್ಕಳ ತಾಯಿಯಾಗುವವಳು
ನನಗಾಗಿ ಪ್ರಾರ್ಥಿಸುವವಳು
ಹಲವು ಕನಸುಗಳು ಹೃದಯಲ್ಲಿಡುವಂತೆ ಮಾಡುವವಳು
ನನ್ನ ದುನಿಯಾ & ಅಖಿರಾ ವಿಜಯದ ದಾರಿಯವಳು
ಅವಳೇ, ನನ್ನವಳಾಗಿ ಬರುವವಳು..

ಗಿರೀಶ್ ಕಾರ್ನಾಡ್ ಬಿತ್ತಿ ಹೋಗಿದ್ದಾರೆ

ಗಿರೀಶ್ ಕಾರ್ನಾಡ್ ಸತ್ತಿಲ್ಲ
ವೈಚಾರಿಕತೆಯನ್ನು ಬಿತ್ತಿ ಹೋಗಿದ್ದಾರೆ.

ಸಾವಿನಲ್ಲಿ ಸಂಭ್ರಮ ಪಡುತ್ತಿರುವವರಿಗೆ ಶ್ರದ್ಧಾಂಜಲಿ.

ಕರ್ನಾಟಕದ ರಾಜಕೀಯ

ಬಿಜೆಪಿಯಲ್ಲಿನ ಅತೃಪ್ತರಿಂದ ಸಹಿಸಿಕೊಳ್ಳಲಾರದೆ ಯಡಿಯೂರಪ್ಪ ಕಾಂಗ್ರೆಸ್ ಸೇರಲೂಬಹುದು.
ಇದು ರಾಜಕೀಯ. ಏನು ಬೇಕಾದರೂ ಸಂಭವಿಸಬಹುದು.