ನನ್ನೂರು ಅಕ್ಷರಶಃ ಮುಳುಗಡೆಯ ಭೀತಿಯಲ್ಲಿತ್ತು. ಜೀವನದಿ ನೇತ್ರಾವತಿಗೆ ನಮ್ಮ ಪ್ರಾರ್ಥನೆ ಕೇಳಿದೆ. ಸಮಾಧಾನಪಡಿಸಿಕೊಂಡು ನಮ್ಮೊಂದಿಗೆ ಕರುಣೆ ತೋರಿದೆ. ನನ್ನೂರ ಯುವಕರ ಕಾರ್ಯ ವೈಖರಿ ನಿಜಕ್ಕೂ ಶ್ಲಾಘನೀಯ. ಹಲವಾರು ಪರಿಹಾರದ ಕರೆಗಳು ತಡ ರಾತ್ರಿ ಕೂಡ ನಮ್ಮೊಂದಿಗಿತ್ತು. ಭೀಕರ ಮಳೆಯಿಂದಾದ ನೆರೆಗೆ ಸಮಾಜದಲ್ಲಿನ ಹೃದಯ ವೈಶಾಲ್ಯತೆಯನ್ನು ತೋರಿಸಿದೆ.
ಸದ್ಯ ನನ್ನೂರು ನಿಟ್ಟುಸಿರು ಬಿಟ್ಟಿದೆ.
No comments:
Post a Comment