Sunday 16 July 2017

ಘಟನೆಯನ್ನ ತಿರುಚುವ ಮಾಧ್ಯಮ ವರದಿ

ದೊಂಬಿ, ಗಲಭೆಯ ಸಂದರ್ಭ
ಕಲ್ಲುಗಳು ಪತ್ತೆಯಾಗುತ್ತೆ,
ಡಿಸೈನ್ ಗಾಗಿ ಎಂದು ವರದಿಯಾಗುತ್ತೆ
144ಸೆಕ್ಷನ್ ಜಾರಿಯಲ್ಲಿದ್ದಾಗ
ಪ್ರತಿಭಟನೆ ಹೆಸರಲ್ಲಿ ಸಂಭ್ರಮಿಸಲಾಗುತ್ತೆ
ಸಂತಾಪ ಸೂಚಕ ಸಭೆಯೆಂದು ವರದಿಯಾಗುತ್ತೆ
ಶವಯಾತ್ರೆ ಹೆಸರಲ್ಲಿ
ಕೋಮು ಹಿಂಸಾಚಾರ ನಡೆಯುತ್ತೆ
ಶವಯಾತ್ರೆ ಮೇಲೆ ಕಲ್ಲು ತೂರಲಾಗಿದೆಂದು ವರದಿಯಾಗುತ್ತೆ
ಕುಟುಂಬ ಕಲಹದಿಂದ
ಸಂಬಂಧಿಕರಿಂದಲೇ ಕೊಲೆಯಾಗುತ್ತೆ
ಕೋಮುವಾದಿಗಳಿಂದ ಹತ್ಯೆಯೆಂದು ವರದಿಯಾಗುತ್ತೆ
ಜಿಲ್ಲೆಗೆ ಬೆಂಕಿ ಹಾಕ್ತೇವೆ
ಬಹಿರಂಗ ಸವಾಲ್ ಬೀಳುತ್ತೆ
ಅವರ ಪರವಾಗಿಯೇ ವಾದಿಸುತ್ತೆ

No comments:

Post a Comment