Saturday 15 July 2017

ಸಚಿವರಿಗೊಂದು ಪತ್ರ

ನಾಡಿನ ಜವಾಬ್ದಾರಿಗಾಗಿ
ಹಲವು ಬಾರಿ ಆರಿಸಿ ಸಿಕ್ಕಿದ್ದು
ಜಿಲ್ಲೆಯ ಉಸ್ತುವಾರಿ,
ದಿನ ಕಳೆದಂತೆ...
ಆರಿಸಿ ಸೋತಿದ್ದು ಅರಿವಾಗಿದೆ
ಕೊಟ್ಟು ಕೆಟ್ಟವರ ಜೀವಕೆ
ಲಾಠಿಯ ಮಾರಾಮಾರಿ...!
ನ್ಯಾಯಪಾಲನೆಗೆ ನೀಡಿದ ಓಟು
ಕಾನೂನನು ಉಳಿಸಲಾಗಲಿಲ್ಲ
ದಿನ ಕಳೆದಂತೆ
ಕ್ಷಣ ಕನಿಕರವೂ ಬರಲಿಲ್ಲ!
ಖುರೈಷಿಯ ನ್ಯಾಯ ಬಿಕ್ಕಟ್ಟು
ಸಮುದಾಯವಾಗಿದೆ ಒಗ್ಗಟ್ಟು
ಸರಾಸರಿ ಸ್ವರವೆದ್ದಿದೆ...!
ಸಮಾಜದ ಸಮಸ್ಯೆಗೆ
ಸಮಯವೆಲ್ಲಿ ನಿಮ್ಮ ಬಳಿ
ದಿನ ಕಳೆದಂತೆ
ಜನ ಧ್ವನಿಯ ಅಪ್ಪಚ್ಚಿಯಾಗಿಸುವ
ಪ್ರಜೆ ಘನತೆಯ ಇಲ್ಲವಾಗಿಸಿದ
ಘನವೆತ್ತ ಸಚಿವ ಸಹೋದರರೇ ನೀವು?
ನಾವು ನಮ್ಮಲ್ಲೇ ಕೇಳುತ್ತಿರುವೆವು
ಬೇಕೇ ನಮಗೆ ನಿಮ್ಮಂತವರು?
ಕಾನೂನಿನಡಿಯಲಿ ದೇಶಪ್ರೇಮಿ ಪ್ರಶ್ನೆಗೆ
ಉತ್ತರ ನೀಡುವವರು ಮೌನ!
ದಿನ ಕಳೆದಂತೆ
ತಪ್ಪು ಅರಿವಾಗುತಿದೆ
ಚಿಂತಿಸುವ ಕಾಲ ನಮ್ಮೆದುರುಗಿದೆ..!

No comments:

Post a Comment